03/03/2026
ಸಮಸ್ತ ಬ್ರಾಹ್ಮಣ ಸಮಾಜ ಹುಬ್ಬಳ್ಳಿ-ಧಾರವಾಡ ಹಾಗೂ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ವತಿಯಿಂದ ಕಳೆದ 2019 ರಿಂದ ಕೊವಿಡ್ನ ಸಮಯದಿಂದ ರಕ್ತದ ಅಭಾವ ತುಂಬಾ ಅಭಾವವಿದ್ದಾಗ ಸಮಸ್ತ ಬ್ರಾಹ್ಮಣ ಸಮುದಾಯದವರು ಒಗ್ಗೂಡಿಸಿಕೊಂಡು ಪ್ರಾರಂಭವಾದ ಈ ರಕ್ತದಾನ ಶಿಬಿರ ನಿರಂತರವಾಗಿ 6 ವರ್ಷಗಳಿಂದ ಇಲ್ಲಿಯವರೆಗೆ 2224 ಜನರಿಂದ ರಕ್ತವನ್ನು ಸಂಗ್ರಹಿಸಿ ಅದರಿಂದ 6484ಕ್ಕೂ ಹೆಚ್ಚು ಕಾಂಪೊನೆAಟಗಳನ್ನು ವಿಭಜಿಸಿ 6000ಕ್ಕೂ ಹೆಚ್ಚು ರೋಗಿಗಳಿಗೆ ವಿತರಿಸಲಾಗಿದೆ.
ಬ್ರಾಹ್ಮಣರು ಮಾತ್ರವಲ್ಲದೆ ಜಾತಿ, ಮತ, ಬೇದ, ಬಾವ ಮರೆತು ಎಲ್ಲ ಜನರನ್ನು ಸೆರಿಸಿಕೊಂಡು ಸಮಾಜಮುಖಿ ಕಾರ್ಯಕ್ಕೆ ಎಲ್ಲರು ಕೈ ಜೊಡಿಸಿ ನಿರಂತರವಾಗಿ ಈ ರಕ್ತದಾನ ಕಾರ್ಯವನ್ನು ಯಶಸ್ವಿವಿಗೊಳಿಸುತ್ತಾ ಬಂದಿದೆ. ಅದೆ ರೀತಿ ಈ ಬಾರಿಯು ಕೂಡ ರಕ್ತದಾನ ಶಿಬಿರವನ್ನು ಆಯೊಜಿಸಿದ್ದು, 211ಕ್ಕೂ ಹೆಚ್ಚು ಜನರು ಹೆಚ್ಚಿನ ಸಂಖ್ಯೇಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಬಾರಿ ಶ್ರೀ ರಾಘವೇಂದ್ರ ಸ್ವಾಮಿಗಳ 431 ವರ್ದಂತಿ ಉತ್ಸವ ಮಾಡಲಾಗುತ್ತಿದ್ದು. ಈ ಬಾರಿ 211 ಜನರು ರಕ್ತದಾನ ಮಾಡುವದರ ಮೂಲಕ ರಕ್ತದಾನಿಗಳು ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದರು. ದಿನಾಂಕ : 01-03-2026, ರವಿವಾರದಂದು ಬೆಳಗ್ಗೇ: 08:00 ರಿಂದ ಸಾಯಂಕಾಲ: 05:00ರ ವರೆಗೆ ಸ್ಥಳ : ಶ್ರೀ ಸುಜಯಿಂದ್ರ ಸಭಾ ಭವನ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳಾದ ಶ್ರೀ ನಂದಕುಮಾರ, ಖ್ಯಾತ ಉದ್ಯಮಿಗಳಾದ ಶ್ರೀ ಗೋವಿಂದ ಜೋಶಿ, ಡಾ. ಸಿಎಚ್. ವಿ.ಎಸ್.ವಿ. ಪ್ರಸಾದ ಸ್ವರ್ಣ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕರು, ರಾಷ್ಟ್ರೋತ್ಥಾನ ರಕ ್ತ ಕೇಂದ್ರದ ಮುಖ್ಯಸ್ಥರು, ಶ್ರೀ ದತ್ತಮೂರ್ತಿ ಕುಲಕರ್ಣಿ, ದೀಪಪ್ರಜ್ವಲನೆ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಯೊಂದಿಗೆ ಶ್ರೀಧರ ನಾಡಿಗೇರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥರು ಶ್ರೀ ದತ್ತಮೂರ್ತಿ ಕುಲಕರ್ಣಿ, 90 ನೇ ಬಾರಿ ರಕ್ತದಾನ ಮಾಡುವದರ ಮೂಲಕ ಡಾ ಪವನ ಜೋಶಿ, ಶ್ರೀ ಕೆ. ಡಿ ಕುಲಕರ್ಣಿ, ಶ್ರೀ ಲಕ್ಷ್ಮಣ ಕುಲಕರ್ಣಿ, ಡಾ ಬಿ. ಬಿ ಪಾಟೀಲ್, ಶ್ರೀ ಜಯತೀರ್ಥ ಕಟ್ಟಿ, ಡಾ ಸಂದೀಪ್ ಕುಲಕರ್ಣಿ, ಶ್ರೀ ಗೋಪಾಲ್ ಕುಲಕರ್ಣಿ, ಡಾ ಸುನಿಲ್ ಗೋಖಲೆ, ಶ್ರೀಮತಿ ಭಾರತಿ ಪಾಟೀಲ, ಶ್ರೀ ಕಿರಣ ಗಡ, ಶ್ರೀ ವಾದಿರಾಜ್ ಕುಲಕರ್ಣಿ, ಶ್ರೀಮತಿ ಸಂಧ್ಯಾ ದೀಕ್ಷಿತ, ಶ್ರೀ ಪವನ ದೇಸಾಯಿ, ಶ್ರೀ ದ್ಯಾನೇಶ ನಾತು, ಶ್ರೀ ಪ್ರದೀಪ್ ಜೋಶಿ, ಶ್ರೀ ಉಮೇಶ ದುಷಿ, ಶ್ರೀ ಸುನಿಲ್ ಗುಮಾಸ್ತೆ, ಶ್ರೀ ರಾಜೀವ ಜೋಶಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು. ರಕ್ತದಾನ ಶಿಬಿರದ ಆಯೋಜಕರಾದ ಸಮಸ್ತ ಬ್ರಾಹ್ಮಣ ಸಮಾಜ ಹುಬ್ಬಳ್ಳಿ ಧಾರವಾಡ ಅವರಿಗೆ ಹಾಗೂ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ರಕ್ತ ದಾನಿಗಳಿಗೆ ರಾಷ್ಟ್ರೋತ್ಥಾನ ರಕ್ತ ಕೇಂದ್ರವತಿಯಿAದ ಅನಂತ ಅನಂತ ಧನ್ಯವಾದಗಳು. ಶಿಬಿರ ಸಂಯೋಜಕರು ಶ್ರೀ ಸಿದ್ದು ಅಂಗಡಿ ಹಾಗೂ ಶ್ರೀ ವೈಭವ ಕಟ್ಟಿ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅನೇಕರು ರಕ್ತದಾನ ಮಾಡುವದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.