Rashtrotthana Blood Centre

Rashtrotthana Blood Centre The Rastrotthana Blood Bank in Hubballi stands out as one of the Premier Blood Centre in the entirety of North Karnataka 🩸🩸🩸

ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಡಾ. ಶಿವರಾಮ ಕಾರಂತರ ಕೊಡುಗೆ ಅನನ್ಯ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವ...
09/10/2025

ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಡಾ. ಶಿವರಾಮ ಕಾರಂತರ ಕೊಡುಗೆ ಅನನ್ಯ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಸಾಹಿತಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಯಕ್ಷಗಾನ ಕಲಾವಿದ ಮೊದಲಾದ ಕ್ಷೇತ್ರಗಳಲ್ಲಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಶ್ರೀಯುತರ ಜನ್ಮದಿನದಂದು ಗೌರವ ನಮನಗಳು.

ವಿಶ್ವ ಅಂಚೆ ದಿನಹಲವು ವರ್ಷಗಳಿಂದ ಜನಜೀವನದ ಭಾಗವಾಗಿ ಸಂವಹನದ ಕೊಂಡಿಯಾಗಿ ಬಂದಿರುವ ಅಂಚೆ ವ್ಯವಸ್ಥೆಯ ಸಾಧನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸಲ...
08/10/2025

ವಿಶ್ವ ಅಂಚೆ ದಿನ
ಹಲವು ವರ್ಷಗಳಿಂದ ಜನಜೀವನದ ಭಾಗವಾಗಿ ಸಂವಹನದ ಕೊಂಡಿಯಾಗಿ ಬಂದಿರುವ ಅಂಚೆ ವ್ಯವಸ್ಥೆಯ ಸಾಧನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿ ಪ್ರತೀ ವರ್ಷ ಅಕ್ಟೋಬರ್ 09 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ

ಶ್ರೀ ಹಯವದನ ಅವರು 35ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP  ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹ...
08/10/2025

ಶ್ರೀ ಹಯವದನ ಅವರು 35ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ ಅಭಿನಂದನೆಗಳು💐💐💐

ಭಗವಂತ ಇವರಿಗೆ ಆಯುರಾರೋಗ್ಯ, ಸಂಪತ್ತು,
ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಎ೦ದು ಭಗವಂತನಿಗೆ ಪ್ರಾರ್ಥಿಸುತ್ತೇವೆ.

ಆತ್ಮೀಯರು , ಸಮಾಜ ಸೇವಕರು , ಸರಳ ಸಜ್ಜನ ವ್ಯಕ್ತಿ , ಕೆ.ಜಿ.ಪಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ ಗಣೇಶ ಡಿ ಶೇಟ್ ಅವರ 55ನೇ ಹುಟ್ಟುಹಬ್ಬದ ಅಂಗವ...
08/10/2025

ಆತ್ಮೀಯರು , ಸಮಾಜ ಸೇವಕರು , ಸರಳ ಸಜ್ಜನ ವ್ಯಕ್ತಿ , ಕೆ.ಜಿ.ಪಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ
ಡಾ ಗಣೇಶ ಡಿ ಶೇಟ್ ಅವರ 55ನೇ ಹುಟ್ಟುಹಬ್ಬದ ಅಂಗವಾಗಿ ಬ್ರಹತ್ ರಕ್ತದಾನ ಶಿಬಿರವನ್ನು ದಿನಾಂಕ 07.10.2025 ರಂದು ಅಮರಗೋಳದಲ್ಲಿ ಇರುವ ರಾಯಲ್ ರಿಟ್ಜ್ ಹೋಟೆಲನಲ್ಲಿ ಯಶಸ್ವಿಆಗಿ ಆಯೋಜನೆ ಮಾಡಿದ್ದರು.
ರಕ್ತದಾನ ಶಿಬಿರದ ಆಯೋಜಕರಿಗೆ ಮತ್ತು ರಕ್ತ ದಾನಿಗಳಿಗೆ ರಾಷ್ಟ್ರೋತ್ಥಾನ ರಕ್ತ ಕೇಂದ್ರವತಿಯಿಂದ ಅನಂತ ಅನಂತ ಧನ್ಯವಾದಗಳು

ಭಾರತೀಯ ವಾಯುಪಡೆ ದಿನಅತ್ಯಾಧುನಿಕ ಶಾಸ್ತ್ರಾಸ್ತ್ರ ಮತ್ತು ಶಿಸ್ತಿನ ಸಿಪಾಯಿಗಳೊಂದಿಗೆ ದೇಶ ರಕ್ಷಣೆಗಾಗಿ ಸದಾ ಸಿದ್ಧವಾಗಿರುವ ಭಾರತೀಯ ವಾಯುಪಡೆಯ ...
07/10/2025

ಭಾರತೀಯ ವಾಯುಪಡೆ ದಿನ
ಅತ್ಯಾಧುನಿಕ ಶಾಸ್ತ್ರಾಸ್ತ್ರ ಮತ್ತು ಶಿಸ್ತಿನ ಸಿಪಾಯಿಗಳೊಂದಿಗೆ ದೇಶ ರಕ್ಷಣೆಗಾಗಿ ಸದಾ ಸಿದ್ಧವಾಗಿರುವ ಭಾರತೀಯ ವಾಯುಪಡೆಯ ಸಮಸ್ತ ಯೋಧರು ಹಾಗೂ ಸಿಬ್ಬಂದಿ ವರ್ಗಕ್ಕೆ ನಮನಗಳು

1975 ರ ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳಲ್ಲಿಯೂ ಭರವಸೆಯ ಕಿರಣವಾಗಿ, ದೇಶದ ಜನರಿಗೆ ಉತ್ಸಾಹವನ್ನು ತುಂಬಿ, ಪ್ರಜಾಪ್ರಭುತ್ವದ ಉಳಿವಿಗೆ ದಣಿವ...
07/10/2025

1975 ರ ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳಲ್ಲಿಯೂ ಭರವಸೆಯ ಕಿರಣವಾಗಿ, ದೇಶದ ಜನರಿಗೆ ಉತ್ಸಾಹವನ್ನು ತುಂಬಿ, ಪ್ರಜಾಪ್ರಭುತ್ವದ ಉಳಿವಿಗೆ ದಣಿವರಿಯದೆ ಹೋರಾಡಿದ ಲೋಕನಾಯಕರಾದ ದಿವಂಗತ ಜಯಪ್ರಕಾಶ ನಾರಾಯಣ ರವರ ಪುಣ್ಯಸ್ಮರಣೆಯಂದು ಕೋಟಿ ಕೋಟಿ ನಮನಗಳು

‎ಸಮಸ್ತ ರೈತ ಬಾಂಧವರಿಗೆ ಸೀಗೆ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳುರೈತರಿಗೆ ಬಲು ವಿಶೇಷವಾದ ಈ ಹುಣ್ಣಿಮೆಯಂದು, ಜಗದ ಹಸಿವು ನೀಗಿಸುವ ಅನ್ನದಾತರಿಗೆ ...
07/10/2025

‎ಸಮಸ್ತ ರೈತ ಬಾಂಧವರಿಗೆ ಸೀಗೆ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು
ರೈತರಿಗೆ ಬಲು ವಿಶೇಷವಾದ ಈ ಹುಣ್ಣಿಮೆಯಂದು, ಜಗದ ಹಸಿವು ನೀಗಿಸುವ ಅನ್ನದಾತರಿಗೆ ಭೂತಾಯಿ ಸುಖ, ಸಮೃದ್ಧಿ, ನೆಮ್ಮದಿ ನೀಡಲಿ. ರೈತರ ಮೊಗದಲ್ಲಿ ಯಾವತ್ತೂ ಸಂತಸ ತುಂಬಿರಲಿ ಎಂದು ಪ್ರಾರ್ಥಿಸುತ್ತೇವೆ.

ಭಕ್ತಿ ಮತ್ತು ಪ್ರೀತಿಯ ಅತ್ಯುನ್ನತ ಆದರ್ಶ, ಶ್ರೀ ಕೃಷ್ಣನ ಅನನ್ಯ ಭಕ್ತೆ ಶಿರೋಮಣಿ "ಮೀರಾ ಬಾಯಿ", ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಕೋಟಿ ...
06/10/2025

ಭಕ್ತಿ ಮತ್ತು ಪ್ರೀತಿಯ ಅತ್ಯುನ್ನತ ಆದರ್ಶ, ಶ್ರೀ ಕೃಷ್ಣನ ಅನನ್ಯ ಭಕ್ತೆ ಶಿರೋಮಣಿ "ಮೀರಾ ಬಾಯಿ", ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಕೋಟಿ ನಮನಗಳು.

ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. ಭಾರತದ ಮಹಾಕಾವ್ಯ ರಾಮಾಯಣವನ್ನು ರಚಿಸಿ ಜಗತ್ತಿಗೆ ಹಲವು ಆದರ್ಶ, ಮೌಲ್ಯ...
06/10/2025

ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. ಭಾರತದ ಮಹಾಕಾವ್ಯ ರಾಮಾಯಣವನ್ನು ರಚಿಸಿ ಜಗತ್ತಿಗೆ ಹಲವು ಆದರ್ಶ, ಮೌಲ್ಯಗಳನ್ನು ಸಾರಿದ ಮಹರ್ಷಿ ವಾಲ್ಮೀಕಿ ಅವರ ಸಮನ್ವಯತೆಯ ವಿಚಾರಗಳು ಸರ್ವಕಾಲಕ್ಕೂ ಸತ್ಯವಾದುದು.

ಕನ್ನಡದ ಖ್ಯಾತ ಸಾಹಿತಿ, ಕಗ್ಗ ಬ್ರಹ್ಮ ಶ್ರೀ ಡಿ.ವಿ.ಗುಂಡಪ್ಪ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇವೆ. "ಮಂಕುತಿಮ್ಮನ ಕಗ್ಗ" ...
06/10/2025

ಕನ್ನಡದ ಖ್ಯಾತ ಸಾಹಿತಿ, ಕಗ್ಗ ಬ್ರಹ್ಮ ಶ್ರೀ ಡಿ.ವಿ.ಗುಂಡಪ್ಪ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇವೆ. "ಮಂಕುತಿಮ್ಮನ ಕಗ್ಗ" ಕೃತಿಯ ಮೂಲಕ ಜೀವನದ ಮೌಲ್ಯಗಳನ್ನು ಸಾರಿದ ಶ್ರೀಯುತರು, ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಅವಿಸ್ಮರಣೀಯ.

ಹಸಿರು ಕ್ರಾಂತಿ', 'ಕ್ಷೀರ ಕ್ರಾಂತಿ'ಗಳನ್ನು ಉತ್ತೇಜಿಸಿದ ದೂರದೃಷ್ಟಿಯ ನಾಯಕ, ಮಾಜಿ ಪ್ರಧಾನಿ, ಭಾರತ ರತ್ನ ದಿವಂಗತ ಲಾಲ್ ಬಹಾದ್ದೂರ್ ಶಾಸ್ತ್ರಿ...
01/10/2025

ಹಸಿರು ಕ್ರಾಂತಿ', 'ಕ್ಷೀರ ಕ್ರಾಂತಿ'ಗಳನ್ನು ಉತ್ತೇಜಿಸಿದ ದೂರದೃಷ್ಟಿಯ ನಾಯಕ, ಮಾಜಿ ಪ್ರಧಾನಿ, ಭಾರತ ರತ್ನ ದಿವಂಗತ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕ ನಮನಗಳು.ದಸರಾ ಹಬ್ಬದ ಶುಭಾಶಯಗಳು

ಶ್ರೀ ಮಧ್ವಾಚಾರ್ಯ ಜಯಂತಿಯ ಶುಭಾಶಯಗಳುಪ್ರಥಮೋ ಹನುಮನ್ನಾಮ ದ್ವಿತೀಯೋ ಭೀಮ ಏವಚ ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕ'.ಜಗತ್ತಿಗೆ ದ್ವೈತ ...
01/10/2025

ಶ್ರೀ ಮಧ್ವಾಚಾರ್ಯ ಜಯಂತಿಯ ಶುಭಾಶಯಗಳು
ಪ್ರಥಮೋ ಹನುಮನ್ನಾಮ ದ್ವಿತೀಯೋ ಭೀಮ ಏವಚ ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕ'.
ಜಗತ್ತಿಗೆ ದ್ವೈತ ಮತವನ್ನು ಪರಿಚಯಿಸಿದ ದ್ವೈತಮತದ ಸ್ಥಾಪಕರು, ಪೂರ್ಣಪ್ರಜ್ಞ ಸ್ವರೂಪ ಶ್ರೀಮನ್ ಮಧ್ವಾಚಾರ್ಯ ಜಯಂತಿಯ ಶುಭಾಶಯಗಳು. ಭಕ್ತಿ ಮಾರ್ಗವನ್ನು ಬೋಧಿಸಿದ ಇವರ ಆದರ್ಶಗಳು, ಚಿಂತನೆಗಳು, ಬೋಧನೆಗಳು, ಆಧ್ಯಾತ್ಮಿಕ ಸಾಧನೆಗೆ ಸದಾ ಸ್ಪೂರ್ತಿದಾಯಕ.

Address

Dee Jay Building, Neeligin Road, Hubballi
Hubli
580029

Alerts

Be the first to know and let us send you an email when Rashtrotthana Blood Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Rashtrotthana Blood Centre:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category