Rashtrotthana Blood Centre

Rashtrotthana Blood Centre The Rastrotthana Blood Bank in Hubballi stands out as one of the Premier Blood Centre in the entirety of North Karnataka 🩸🩸🩸

ರಾಷ್ಟ್ರೀಯ ಭದ್ರತಾ ದಿನದಂದು ಹೃತ್ಪೂರ್ವಕ ಶುಭಾಶಯಗಳು ರಾಷ್ಟ್ರೀಯ ಭದ್ರತಾ ದಿನದಂದು ದೇಶದ ಭದ್ರತೆಗೆ ಸಮರ್ಪಿತವಾಗಿರುವ ಎಲ್ಲಾ ಪೊಲೀಸ್ ಅಧಿಕಾರಿ...
03/03/2026

ರಾಷ್ಟ್ರೀಯ ಭದ್ರತಾ ದಿನದಂದು ಹೃತ್ಪೂರ್ವಕ ಶುಭಾಶಯಗಳು
ರಾಷ್ಟ್ರೀಯ ಭದ್ರತಾ ದಿನದಂದು ದೇಶದ ಭದ್ರತೆಗೆ ಸಮರ್ಪಿತವಾಗಿರುವ ಎಲ್ಲಾ ಪೊಲೀಸ್ ಅಧಿಕಾರಿಗಳು, ಭದ್ರತಾ ಪಡೆಗಳು ಮತ್ತು ಜಾಗರೂಕ ನಾಗರಿಕರಿಗೆ ನಮಸ್ಕಾರಗಳು. ಈ ದಿನವು ಜಾಗರೂಕತೆ, ಭದ್ರತೆ ಮತ್ತು ಜವಾಬ್ದಾರಿಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಪ್ರತಿಜ್ಞೆ ಮಾಡಲು ನಮಗೆ ಕಲಿಸುತ್ತದೆ.

ಹುಬ್ಬಳ್ಳಿ ಸಮಸ್ತ ಬ್ರಾಹ್ಮಣ ಸಮಾಜ ಹು-ಧಾ, ಶಾ ದಾಮಜಿ ಜಾಧವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರ ವತಿಯಿಂದ ಇಲ್ಲಿಯ ಭವಾನಿ ನಗರದ ಶ್ರ...
03/03/2026

ಹುಬ್ಬಳ್ಳಿ ಸಮಸ್ತ ಬ್ರಾಹ್ಮಣ ಸಮಾಜ ಹು-ಧಾ, ಶಾ ದಾಮಜಿ ಜಾಧವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರ ವತಿಯಿಂದ ಇಲ್ಲಿಯ ಭವಾನಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೀಂದ್ರ ಸಭಾ ಭವನದಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಿಗೇರ ಉದ್ಘಾಟಿಸಿದರು. ಒಟ್ಟು 211 ಜನರು ರಕ್ತದಾನ ಮಾಡಿದರು. ರಾಷ್ಟೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಅವರು 90 ಬಾರಿ ರಕ್ತದಾನ ಮಾಡುವುದರ ಮೂಲಕ ಯುವಕರಿಗೆ ಪ್ರೇರಣೆಯಾದರು.

ಹುಬ್ಬಳ್ಳಿಯ ಭವಾನಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೀಂದ್ರ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್‌ ರಕ್ತದಾನ ಶಿಬಿರದಲ್ಲಿ ಜನರು ರಕ್ತದಾನ ಮಾಡಿದರು. ಶ್ರೀಧರ ನಾಡಿಗೇರ, ಎಚ್.ಎನ್. ನಂದಕುಮಾರ, ಗೋವಿಂದ ಜೋಶಿ, ಜಯತೀರ್ಥ ಕಟ್ಟಿ, ಡಾ.ವಿ.ಎಸ್.ವಿ. ಪ್ರಸಾದ ಇತರರು ಇದ್ದರು. ಉದ್ಯಮಿಗಳಾದ ಎಚ್.ಎನ್. ನಂದಕುಮಾರ, ಗೋವಿಂದ ಜೋಶಿ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಡಾ. ಪವನ ಜೋಶಿ, ಕೆ.ಡಿ. ಕುಲಕರ್ಣಿ, ಲಕ್ಷ್ಮಣ ಕುಲಕರ್ಣಿ, ಡಾ.ಬಿ.ಬಿ. ಪಾಟೀಲ. ಜಯತೀರ್ಥ ಕಟ್ಟಿ, ಡಾ. ಸಂದೀಪ ಕುಲಕರ್ಣಿ, ಗೋಪಾಲ ಕುಲಕರ್ಣಿ, ಡಾ. ಸುನೀಲ ಗೋಖಲೆ, ಭಾರತಿ ಪಾಟೀಲ, ಸಂಧ್ಯಾ ದೀಕ್ಷಿತ, ಕಿರಣ ಗಡ ಹಗೂ ಇನ್ನು ಅನೇಕರು ಉಪಸ್ಥಿತರಿದ್ದರು

ಸಮಸ್ತ ಬ್ರಾಹ್ಮಣ ಸಮಾಜ ಹುಬ್ಬಳ್ಳಿ-ಧಾರವಾಡ ಹಾಗೂ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ವತಿಯಿಂದ ಕಳೆದ 2019 ರಿಂದ ...
03/03/2026

ಸಮಸ್ತ ಬ್ರಾಹ್ಮಣ ಸಮಾಜ ಹುಬ್ಬಳ್ಳಿ-ಧಾರವಾಡ ಹಾಗೂ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ವತಿಯಿಂದ ಕಳೆದ 2019 ರಿಂದ ಕೊವಿಡ್‌ನ ಸಮಯದಿಂದ ರಕ್ತದ ಅಭಾವ ತುಂಬಾ ಅಭಾವವಿದ್ದಾಗ ಸಮಸ್ತ ಬ್ರಾಹ್ಮಣ ಸಮುದಾಯದವರು ಒಗ್ಗೂಡಿಸಿಕೊಂಡು ಪ್ರಾರಂಭವಾದ ಈ ರಕ್ತದಾನ ಶಿಬಿರ ನಿರಂತರವಾಗಿ 6 ವರ್ಷಗಳಿಂದ ಇಲ್ಲಿಯವರೆಗೆ 2224 ಜನರಿಂದ ರಕ್ತವನ್ನು ಸಂಗ್ರಹಿಸಿ ಅದರಿಂದ 6484ಕ್ಕೂ ಹೆಚ್ಚು ಕಾಂಪೊನೆAಟಗಳನ್ನು ವಿಭಜಿಸಿ 6000ಕ್ಕೂ ಹೆಚ್ಚು ರೋಗಿಗಳಿಗೆ ವಿತರಿಸಲಾಗಿದೆ.
ಬ್ರಾಹ್ಮಣರು ಮಾತ್ರವಲ್ಲದೆ ಜಾತಿ, ಮತ, ಬೇದ, ಬಾವ ಮರೆತು ಎಲ್ಲ ಜನರನ್ನು ಸೆರಿಸಿಕೊಂಡು ಸಮಾಜಮುಖಿ ಕಾರ್ಯಕ್ಕೆ ಎಲ್ಲರು ಕೈ ಜೊಡಿಸಿ ನಿರಂತರವಾಗಿ ಈ ರಕ್ತದಾನ ಕಾರ್ಯವನ್ನು ಯಶಸ್ವಿವಿಗೊಳಿಸುತ್ತಾ ಬಂದಿದೆ. ಅದೆ ರೀತಿ ಈ ಬಾರಿಯು ಕೂಡ ರಕ್ತದಾನ ಶಿಬಿರವನ್ನು ಆಯೊಜಿಸಿದ್ದು, 211ಕ್ಕೂ ಹೆಚ್ಚು ಜನರು ಹೆಚ್ಚಿನ ಸಂಖ್ಯೇಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಬಾರಿ ಶ್ರೀ ರಾಘವೇಂದ್ರ ಸ್ವಾಮಿಗಳ 431 ವರ್ದಂತಿ ಉತ್ಸವ ಮಾಡಲಾಗುತ್ತಿದ್ದು. ಈ ಬಾರಿ 211 ಜನರು ರಕ್ತದಾನ ಮಾಡುವದರ ಮೂಲಕ ರಕ್ತದಾನಿಗಳು ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದರು. ದಿನಾಂಕ : 01-03-2026, ರವಿವಾರದಂದು ಬೆಳಗ್ಗೇ: 08:00 ರಿಂದ ಸಾಯಂಕಾಲ: 05:00ರ ವರೆಗೆ ಸ್ಥಳ : ಶ್ರೀ ಸುಜಯಿಂದ್ರ ಸಭಾ ಭವನ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳಾದ ಶ್ರೀ ನಂದಕುಮಾರ, ಖ್ಯಾತ ಉದ್ಯಮಿಗಳಾದ ಶ್ರೀ ಗೋವಿಂದ ಜೋಶಿ, ಡಾ. ಸಿಎಚ್. ವಿ.ಎಸ್.ವಿ. ಪ್ರಸಾದ ಸ್ವರ್ಣ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರು, ರಾಷ್ಟ್ರೋತ್ಥಾನ ರಕ ್ತ ಕೇಂದ್ರದ ಮುಖ್ಯಸ್ಥರು, ಶ್ರೀ ದತ್ತಮೂರ್ತಿ ಕುಲಕರ್ಣಿ, ದೀಪಪ್ರಜ್ವಲನೆ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಯೊಂದಿಗೆ ಶ್ರೀಧರ ನಾಡಿಗೇರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥರು ಶ್ರೀ ದತ್ತಮೂರ್ತಿ ಕುಲಕರ್ಣಿ, 90 ನೇ ಬಾರಿ ರಕ್ತದಾನ ಮಾಡುವದರ ಮೂಲಕ ಡಾ ಪವನ ಜೋಶಿ, ಶ್ರೀ ಕೆ. ಡಿ ಕುಲಕರ್ಣಿ, ಶ್ರೀ ಲಕ್ಷ್ಮಣ ಕುಲಕರ್ಣಿ, ಡಾ ಬಿ. ಬಿ ಪಾಟೀಲ್, ಶ್ರೀ ಜಯತೀರ್ಥ ಕಟ್ಟಿ, ಡಾ ಸಂದೀಪ್ ಕುಲಕರ್ಣಿ, ಶ್ರೀ ಗೋಪಾಲ್ ಕುಲಕರ್ಣಿ, ಡಾ ಸುನಿಲ್ ಗೋಖಲೆ, ಶ್ರೀಮತಿ ಭಾರತಿ ಪಾಟೀಲ, ಶ್ರೀ ಕಿರಣ ಗಡ, ಶ್ರೀ ವಾದಿರಾಜ್ ಕುಲಕರ್ಣಿ, ಶ್ರೀಮತಿ ಸಂಧ್ಯಾ ದೀಕ್ಷಿತ, ಶ್ರೀ ಪವನ ದೇಸಾಯಿ, ಶ್ರೀ ದ್ಯಾನೇಶ ನಾತು, ಶ್ರೀ ಪ್ರದೀಪ್ ಜೋಶಿ, ಶ್ರೀ ಉಮೇಶ ದುಷಿ, ಶ್ರೀ ಸುನಿಲ್ ಗುಮಾಸ್ತೆ, ಶ್ರೀ ರಾಜೀವ ಜೋಶಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು. ರಕ್ತದಾನ ಶಿಬಿರದ ಆಯೋಜಕರಾದ ಸಮಸ್ತ ಬ್ರಾಹ್ಮಣ ಸಮಾಜ ಹುಬ್ಬಳ್ಳಿ ಧಾರವಾಡ ಅವರಿಗೆ ಹಾಗೂ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ರಕ್ತ ದಾನಿಗಳಿಗೆ ರಾಷ್ಟ್ರೋತ್ಥಾನ ರಕ್ತ ಕೇಂದ್ರವತಿಯಿAದ ಅನಂತ ಅನಂತ ಧನ್ಯವಾದಗಳು. ಶಿಬಿರ ಸಂಯೋಜಕರು ಶ್ರೀ ಸಿದ್ದು ಅಂಗಡಿ ಹಾಗೂ ಶ್ರೀ ವೈಭವ ಕಟ್ಟಿ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅನೇಕರು ರಕ್ತದಾನ ಮಾಡುವದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವಿಶ್ವ ವನ್ಯಜೀವಿ ದಿನ ನಾವಿಂದು  ವಿಶ್ವ ವನ್ಯಜೀವಿ ದಿನ ಆಚರಿಸುತ್ತಿದ್ದೇವೆ. ಪ್ರಸ್ತುತ 1 ಮಿಲಿಯನ್‌ಗಿಂತ ಹೆಚ್ಚು ಪ್ರಭೇದಗಳು ಅಳಿವಿನಂಚಿನಲ್ಲಿ...
02/03/2026

ವಿಶ್ವ ವನ್ಯಜೀವಿ ದಿನ
ನಾವಿಂದು ವಿಶ್ವ ವನ್ಯಜೀವಿ ದಿನ ಆಚರಿಸುತ್ತಿದ್ದೇವೆ. ಪ್ರಸ್ತುತ 1 ಮಿಲಿಯನ್‌ಗಿಂತ ಹೆಚ್ಚು ಪ್ರಭೇದಗಳು ಅಳಿವಿನಂಚಿನಲ್ಲಿವೆ. ಈ ಮಹತ್ವದ ದಿನದಂದು ನಾವೆಲ್ಲರೂ ನಮ್ಮ ಆಹಾರ-ಔಷಧಿಗೆ ಕೊಡುಗೆ ನೀಡಿರುವ ನೈಸರ್ಗಿಕ ಅಮೂಲ್ಯ ವನ್ಯ ಸಂಪತ್ತು ಮತ್ತು ವೈವಿಧ್ಯ ಜೀವ ಪ್ರಭೇದಗಳನ್ನು ಸಂರಕ್ಷಿಸುವ ಪ್ರತಿಜ್ಞೆ ಮಾಡೋಣ.

"ಸಂಗೀತ, ಸಾಹಿತ್ಯ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ, ಅಂಧ ಮತ್ತು ಅನಾಥರ ಬಾಳಿಗೆ ಬೆಳಕಾದ ಪದ್ಮಭೂಷಣ, ಗದುಗಿನ ಗಾನಯೋಗಿ ಪಂಡಿ...
02/03/2026

"ಸಂಗೀತ, ಸಾಹಿತ್ಯ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ, ಅಂಧ ಮತ್ತು ಅನಾಥರ ಬಾಳಿಗೆ ಬೆಳಕಾದ ಪದ್ಮಭೂಷಣ, ಗದುಗಿನ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಅವರ ಜನ್ಮಸ್ಮರಣೆಯ ದಿನದಂದು ಭಕ್ತಿಪೂರ್ವಕ ನಮನಗಳು.

ನಾಡಿನ ಸಮಸ್ತ ಜನತೆಗೆ ಹೋಳಿ ಹುಣ್ಣಿಮೆ ಹಬ್ಬದ ಹಾರ್ದಿಕ ಶುಭಾಶಯಗಳು.ಹೋಳಿ ಹಬ್ಬದ ಬಣ್ಣಗಳಂತೆ ನಿಮ್ಮೆಲ್ಲರ ಬದುಕಿನಲ್ಲಿಯೂ ಸಂತೋಷದ ಬಣ್ಣ ತುಂಬಲಿ...
02/03/2026

ನಾಡಿನ ಸಮಸ್ತ ಜನತೆಗೆ ಹೋಳಿ ಹುಣ್ಣಿಮೆ ಹಬ್ಬದ ಹಾರ್ದಿಕ ಶುಭಾಶಯಗಳು.
ಹೋಳಿ ಹಬ್ಬದ ಬಣ್ಣಗಳಂತೆ ನಿಮ್ಮೆಲ್ಲರ ಬದುಕಿನಲ್ಲಿಯೂ ಸಂತೋಷದ ಬಣ್ಣ ತುಂಬಲಿ ಎಂದು ಹಾರೈಸುತ್ತೇನೆ.
ಹೋಳಿ ಹುಣ್ಣಿಮೆ ಎಂದರೆ ಬಣ್ಣಗಳ ಓಕುಳಿ ಎಂಬ ಅರ್ಥವಿದೆ ಇದನ್ನು ಕಾಮನ ಹಬ್ಬ ಎಂದು ಕರೆಯಲಾಗುತ್ತದೆ. ನಾವೆಲ್ಲರೂ ಸಂಭ್ರಮ ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸೋಣ.

ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಾತಿನಂತೆ ನಡೆದುಕೊಳ್ಳುತ್ತಿರುವ ರಾಷ್ಟ್ರೋತ್ಥಾನ ರಕ್ತ ಕೇಂದ...
02/03/2026

ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ.
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಾತಿನಂತೆ ನಡೆದುಕೊಳ್ಳುತ್ತಿರುವ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥರು, ಕೇಶವ ವಿದ್ಯಾ ಕೇಂದ್ರ ಶಾಲೆಯ ಕಾರ್ಯದರ್ಶಿಗಳು, ಭವಾನಿ ಶಂಕರ ಹಾಗೂ ನಾರಾಯಣ ದೇವಸ್ಥಾನದ ಕಾರ್ಯದರ್ಶಿಗಳು, ಶಂಕರ ಮಠ ಕಾಳಮ್ಮ ಅಗಸಿಯ ಉಪಾಧ್ಯಕ್ಷರು, ಶ್ರೀ ಬಾಲ ಮಾರುತಿ ದೇವಸ್ಥಾನದ ಕಾರ್ಯದರ್ಶಿಗಳಾದ ಹಾಗೂ ನಮ್ಮೆಲ್ಲರ ಮಾರ್ಗದರ್ಶಿಗಳಾದ ಶ್ರೀ ದತ್ತಮೂರ್ತಿ ಕುಲಕರ್ಣಿಯವರು ದಿನಾಂಕ 01/03/2026 ಸಮಸ್ತ ಬ್ರಾಹ್ಮಣ ಸಮಾಜ ಮತ್ತು ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ 90ನೇ ಬಾರಿ ರಕ್ತದಾನ ಮಾಡಿ ಸಮಾಜಕ್ಕೆ ಹಾಗೂ ಇಂದಿನ ಯುವ ಪೀಳಿಗೆಗೆ ಮಾದರಿ ಯಾಗಿದ್ದಾರೆ.

ಪ್ರಚಾರಕ್ಕಾಗಿ  ಅಲ್ಲ ಪ್ರೇರಣೆಗಾಗಿ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಾತಿನಂತೆ ನಡೆದುಕೊಳ್ಳುತ್ತಿರುವ ರಾಷ್ಟ್ರೋತ್ಥಾನ ರಕ್ತ ಕೇಂ...
02/03/2026

ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ.
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಾತಿನಂತೆ ನಡೆದುಕೊಳ್ಳುತ್ತಿರುವ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥರು, ಕೇಶವ ವಿದ್ಯಾ ಕೇಂದ್ರ ಶಾಲೆಯ ಕಾರ್ಯದರ್ಶಿಗಳು, ಭವಾನಿ ಶಂಕರ ಹಾಗೂ ನಾರಾಯಣ ದೇವಸ್ಥಾನದ ಕಾರ್ಯದರ್ಶಿಗಳು, ಶಂಕರ ಮಠ ಕಾಳಮ್ಮ ಅಗಸಿಯ ಉಪಾಧ್ಯಕ್ಷರು, ಶ್ರೀ ಬಾಲ ಮಾರುತಿ ದೇವಸ್ಥಾನದ ಕಾರ್ಯದರ್ಶಿಗಳಾದ ಹಾಗೂ ನಮ್ಮೆಲ್ಲರ ಮಾರ್ಗದರ್ಶಿಗಳಾದ ಶ್ರೀ ದತ್ತಮೂರ್ತಿ ಕುಲಕರ್ಣಿಯವರು ದಿನಾಂಕ 01/03/2026 ಸಮಸ್ತ ಬ್ರಾಹ್ಮಣ ಸಮಾಜ ಮತ್ತು ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ 90ನೇ ಬಾರಿ ರಕ್ತದಾನ ಮಾಡಿ ಸಮಾಜಕ್ಕೆ ಹಾಗೂ ಇಂದಿನ ಯುವ ಪೀಳಿಗೆಗೆ ಮಾದರಿ ಯಾಗಿದ್ದಾರೆ.

ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ, ಶ್ರೇಷ್ಠ ಕವಯತ್ರಿ, ಗಾನಕೋಗಿಲೆ, ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕಿ ಸರೋಜಿನಿ ನಾಯ್ಡು ಅವರ ಪುಣ್ಯಸ್ಮರಣೆಯ...
02/03/2026

ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ, ಶ್ರೇಷ್ಠ ಕವಯತ್ರಿ, ಗಾನಕೋಗಿಲೆ, ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕಿ ಸರೋಜಿನಿ ನಾಯ್ಡು ಅವರ ಪುಣ್ಯಸ್ಮರಣೆಯಂದು ಶತಶತ ನಮನಗಳು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಅತ್ಯದ್ಭುತ ಬರಹಗಳ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಪ್ರೇಮದ ಭಾವವನ್ನು ತುಂಬಿ ಭಾರತದ ಸಾಹಿತ್ಯ ಪರಂಪರೆಯನ್ನು ಎತ್ತಿ ಹಿಡಿದ ಸರೋಜಿನಿ ನಾಯ್ಡು ಅವರ ಬದುಕು ಸರ್ವರಿಗೂ ಸ್ಪೂರ್ತಿದಾಯಕ

ವಿಶ್ವ ನಾಗರಿಕ ರಕ್ಷಣಾ ದಿನ ಪ್ರಕೃತಿ ವಿಕೋಪ, ಅಗ್ನಿ ಅವಘಡಗಳಂತಹ ತುರ್ತು ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ನಾಗರಿಕರ ರಕ್ಷಣೆಗೆ ಮಂದಾ...
28/02/2026

ವಿಶ್ವ ನಾಗರಿಕ ರಕ್ಷಣಾ ದಿನ
ಪ್ರಕೃತಿ ವಿಕೋಪ, ಅಗ್ನಿ ಅವಘಡಗಳಂತಹ ತುರ್ತು ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ನಾಗರಿಕರ ರಕ್ಷಣೆಗೆ ಮಂದಾಗುವ ಎಲ್ಲಾ ಸ್ವಯಂ ಸೇವಕರಿಗೂ ನನ್ನ ಗೌರವಪೂರ್ಣ ನಮನಗಳು.
ನಾಗರಿಕ ರಕ್ಷಣೆಯ ಮಹತ್ವ ಹಾಗೂ ಅದಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಯಂ ಸೇವಕರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಮಾರ್ಚ್ 1ನ್ನು ವಿಶ್ವ ನಾಗರಿಕ ರಕ್ಷಣಾ ದಿನವಾಗಿ ಆಚರಿಸಲಾಗುವುದು.

28/02/2026

ಬ್ರಹ್ಮ ತೇಜೋ‎ ಬಲಂ ಬಲಂ
ಸಮಸ್ತ ಬ್ರಾಹ್ಮಣ‎ ಸಮಾಜ‎ ಹುಬ್ಬಳ್ಳಿ
ಹುಬ್ಬಳ್ಳಿ‎ ಧಾರವಾಡ ಹಾಗೂ
ನಂಜನಗೂಡು‎ ಶ್ರೀ ರಾಘವೇಂದ್ರ‎ ಸ್ವಾಮಿಗಳ‎ ಮಠ, ಭವಾನಿನಗರ, ಹುಬ್ಬಳ್ಳಿ

ಶ್ರೀ ರಾಘವೇಂದ್ರ ಸ್ವಾಮಿಗಳ 431ನೇ ಜನ್ಮದಿನದ ಅಂಗವಾಗಿ

ಶಾ‎ ದಾಮಜಿ ಜಾದವಜಿ ಛೇಡಾ ಸ್ಮಾರಕ
ರಾಷ್ಟ್ರೋತ್ಥಾನ ರಕ್ತ ಕೇಂದ್ರ,‎ ಹುಬ್ಬಳ್ಳಿ
ಸಹಯೋಗದೊಂದಿಗೆ

ಬೃಹತ್ ರಕ್ತದಾನ‎ ಶಿಬಿರ
ನಾಳೆ ಬೃಹತ್ ರಕ್ತದಾನ ಶಿಬಿರ
ದಿನಾಂಕ : 01-03-2026‎ ರವಿವಾರ ದಂದು

ಸಮಯ : ಬೆಳಗ್ಗೆ‎ 8‎ ಗಂಟೆಯಿ0ದ‎ ಸಂಜೆ 5 ಗಂಟೆಯವರೆಗೆ
ಸ್ಥಳ :‎ ಶ್ರೀ ಸುಜಯೇಂದ್ರ ಸಭಾ‎ ಭವನ
ನಂಜನಗೂಡು ಶ್ರೀ‎ ರಾಘವೇಂದ್ರ‎ ಸ್ವಾಮಿ ಮಠ, ಭವಾನಿ ನಗರ,‎ ಹುಬ್ಬಳ್ಳಿ
ಸಮಸ್ತ ರಾಯರ ಭಕ್ತರಿಗೆ ಹಾರ್ದಿಕ ಸ್ವಾಗತ

ಹುಬ್ಬಳ್ಳಿ ಧಾರವಾಡ‎ ಸಮಸ್ತ‎ ಬ್ರಾಹ್ಮಣ ಸಂಘ‎ ಸಂಸ್ಥೆಗಳು, ಮಠ-ಮಂದಿರಗಳು,‎
ಭಜನಾ ಮಂಡಳಿಗಳು,‎ ಅಷ್ಟೋತ್ತರ‎ ಮಂಡಳಿಗಳು, ರುದ್ರ‎ ಅನುಷ್ಠಾನ ಮಂಡಳಿಗಳು.
ಹೆಚ್ಚಿನ‎ ಮಾಹಿತಿಗಾಗಿ‎ ಸಂಪರ್ಕಿಸಿ

ದತ್ತಮೂರ್ತಿ‎ ಕುಲಕರ್ಣಿ
9448380485, 7019004295

ಕಿರಣ ಗಡ
9845741489

ವೈಭವ ಕಟ್ಟಿ
8970713994

Address

Dee Jay Building, Neeligin Road, Hubballi
Hubli
580029

Alerts

Be the first to know and let us send you an email when Rashtrotthana Blood Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Rashtrotthana Blood Centre:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category