DYFI Dakshina Kannada - Mangalore

DYFI Dakshina Kannada - Mangalore Contact information, map and directions, contact form, opening hours, services, ratings, photos, videos and announcements from DYFI Dakshina Kannada - Mangalore, Mangalore.

ಸುರತ್ಕಲ್ ಗೆ ಸಮುದಾಯ ಆಸ್ಪತ್ರೆ ಮಂಜೂರು ಮಾಡಬೇಕು, ಸರಕಾರಿ ಜಯದೇವ ಹೃದಯದ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥ...
01/12/2025

ಸುರತ್ಕಲ್ ಗೆ ಸಮುದಾಯ ಆಸ್ಪತ್ರೆ ಮಂಜೂರು ಮಾಡಬೇಕು, ಸರಕಾರಿ ಜಯದೇವ ಹೃದಯದ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಆರೋಗ್ಯದ ಹಕ್ಕಿಗಾಗಿ "ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ" ಸುರತ್ಕಲ್ ನಲ್ಲಿ ನಡೆಸಿದ 12 ತಾಸುಗಳ ಸಾಮೂಹಿಕ ಧರಣಿ ಉತ್ತಮ ಜನಬೆಂಬಲದೊಂದಿಗೆ ರಾತ್ರೆ 9 ಗಂಟೆಗೆ ಉತ್ಸಾಹದಾಯಕವಾಗಿ ಸಮಾರೋಪಗೊಂಡಿತು.

#ಸರಕಾರಿಆಸ್ಪತ್ರೆಬಲಪಡಿಸಿಖಾಸಗಿಆಸ್ಪತ್ರೆಗಳನ್ನುನಿಯಂತ್ರಿಸಿರಿ ಸರಕಾರಿಆಸ್ಪತ್ರೆಬಲಪಡಿಸಿಖಾಸಗಿಆಸ್ಪತ್ರೆನಿಯಂತ್ರಿಸಿರಿ

ಸುರತ್ಕಲ್ ಗೆ ಸಮುದಾಯ ಆಸ್ಪತ್ರೆ ಮಂಜೂರಾತಿಗೆ ಆಗ್ರಹಿಸಿ ಸುರತ್ಕಲ್  ನಡೆಯುತ್ತಿರುವ  12. ತಾಸುಗಳ‌ ಧರಣಿ ಸ್ಥಳೀಯ ಸಂಘ ಸಂಸ್ಥೆಗಳ ಬೆಂಬಲದೊಂದಿಗ...
01/12/2025

ಸುರತ್ಕಲ್ ಗೆ ಸಮುದಾಯ ಆಸ್ಪತ್ರೆ ಮಂಜೂರಾತಿಗೆ ಆಗ್ರಹಿಸಿ ಸುರತ್ಕಲ್ ನಡೆಯುತ್ತಿರುವ 12. ತಾಸುಗಳ‌ ಧರಣಿ ಸ್ಥಳೀಯ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ.‌ ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಸುರತ್ಕಲ್ ಟೋಲ್ ಗೇಟ್  ಮುಚ್ಚಿದ ಐತಿಹಾಸಿಕ ಕ್ಷಣ ಇಂದಿಗೆ ಮೂರು ವರ್ಷಈ ಗೆಲುವಿನ ಮೂರನೆ ವರ್ಷದ ಸಂಭ್ರಮದ ದಿನದ ಭಾಗವಾಗಿ ಸುರತ್ಕಲ್ ನಲ್ಲಿ ಸಮುದ...
01/12/2025

ಸುರತ್ಕಲ್ ಟೋಲ್ ಗೇಟ್ ಮುಚ್ಚಿದ ಐತಿಹಾಸಿಕ ಕ್ಷಣ ಇಂದಿಗೆ ಮೂರು ವರ್ಷ

ಈ ಗೆಲುವಿನ ಮೂರನೆ ವರ್ಷದ ಸಂಭ್ರಮದ ದಿನದ ಭಾಗವಾಗಿ ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ಮಂಜೂರಾತಿಗೆ ಆಗ್ರಹಿಸಿ 12 ತಾಸುಗಳ ಸಾಮೂಹಿಕ ಧರಣಿ ನಡೆಯುತ್ತಿದೆ.ಸುರತ್ಕಲ್ ಅಲ್ಲಿ 40 ಹಾಸಿಗೆಗಳ ಸಮುದಾಯ ಆಸ್ಪತ್ರೆಗೆ ಆಗ್ರಹಿಸಿ ನಡೆಯುವ ಪ್ರತಿಭಟನೆಯಲ್ಲಿ ವಿವಿಧ ಜನಪರ ಸಂಘಟನೆಯ ಮುಖಂಡರು ಭಾಗಿಯಾಗಿದ್ದಾರೆ.

*ನಾಳೆ ನಡೆಯುವ 12 ತಾಸುಗಳ ಸಾಮೂಹಿಕ ಧರಣಿಯ ಸ್ಥಳದಲ್ಲಿ ಸಿದ್ದತೆಗಳನ್ನು‌ ನಡೆಸುತ್ತಿರುವ ಸಂಗಾತಿಗಳು*
30/11/2025

*ನಾಳೆ ನಡೆಯುವ 12 ತಾಸುಗಳ ಸಾಮೂಹಿಕ ಧರಣಿಯ ಸ್ಥಳದಲ್ಲಿ ಸಿದ್ದತೆಗಳನ್ನು‌ ನಡೆಸುತ್ತಿರುವ ಸಂಗಾತಿಗಳು*

ಆರೋಗ್ಯದ ಹಕ್ಕು ಮೂಲಭೂತ ಹಕ್ಕುಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪಿಸಬೇಕು, ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಬೇಕು,...
30/11/2025

ಆರೋಗ್ಯದ ಹಕ್ಕು ಮೂಲಭೂತ ಹಕ್ಕು

ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪಿಸಬೇಕು, ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಬೇಕು, ಖಾಸಗಿ ಆರೋಗ್ಯದ ವ್ಯಾಪಾರಿಗಳನ್ನು ನಿಯಂತ್ರಿಸಬೇಕು ಎಂಬ ಮುಖ್ಯ ಬೇಡಿಕೆಗಳ ಮೇಲೆ ನಾಳೆ (ಡಿಸೆಂಬರ್ 1) ಸುರತ್ಕಲ್ ನಲ್ಲಿ 12 ತಾಸುಗಳ ಸಾಮೂಹಿಕ ಧರಣಿ.

ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ತಾಲೂಕು ಸರಕಾರಿ ಆಸ್ಪತ್ರೆಗೆ ಆಗ್ರಹಿಸಿ dyfi ತಿಲಕ್ ನಗರ ಘಟಕದಿಂದ ಮದಕ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತ...
28/11/2025

ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ತಾಲೂಕು ಸರಕಾರಿ ಆಸ್ಪತ್ರೆಗೆ ಆಗ್ರಹಿಸಿ dyfi ತಿಲಕ್ ನಗರ ಘಟಕದಿಂದ ಮದಕ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು

*ಖಾಸಗಿ ಆಸ್ಪತ್ರೆಗಳ ಸ್ವರ್ಗದಲ್ಲಿ ಬಡ ರೋಗಿಗಳ ಬದುಕು ನರಕ*9 ಖಾಸಗಿ ಮೆಡಿಕಲ್ ಕಾಲೇಜುಗಳ ಸಂಖ್ಯೆ 10 ಕ್ಕೆ ಏರಿಕೆ ಆಗುತ್ತಿರುವ ಸಂಭ್ರಮದಲ್ಲಿರು...
25/11/2025

*ಖಾಸಗಿ ಆಸ್ಪತ್ರೆಗಳ ಸ್ವರ್ಗದಲ್ಲಿ ಬಡ ರೋಗಿಗಳ ಬದುಕು ನರಕ*

9 ಖಾಸಗಿ ಮೆಡಿಕಲ್ ಕಾಲೇಜುಗಳ ಸಂಖ್ಯೆ 10 ಕ್ಕೆ ಏರಿಕೆ ಆಗುತ್ತಿರುವ ಸಂಭ್ರಮದಲ್ಲಿರುವ ದ.ಕ. ಜಿಲ್ಲೆಯಲ್ಲಿ ಕಡಿಮೆ ಆದಾಯದ ಜನಗಳು ತಮ್ಮ ಕುಟುಂಬಿಕರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಿದಾಗ ಪಡುವ ಪಾಡು ಯಾರಿಗೂ ಬೇಡ. ಅದರಲ್ಲಿಯೂ ಖಾಸಗಿ ಮೆಡಿಕಲ್ ಕಾಲೇಜುಗಳ ಹಿಡಿತಕ್ಕೆ ಸಿಲುಕಿರುವ ಜಿಲ್ಲಾಸ್ಪತ್ರೆ ವೆನ್ಲಾಕ್ "ಅಭಿವೃದ್ದಿ ಹೊಂದುತ್ತಿದೆ" ಎಂದು ಆಳುವ ಜನಗಳು ಸಂಭ್ರಮಿಸುತ್ತಿರುವ ಸಂದರ್ಭದಲ್ಲೆ ಕರಾವಳಿಯಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಟ ಒಂದೊಂದಾಗಿ ಹೊರಬರುತ್ತಿದೆ. ನೋಡುವ ಕಣ್ಣು ಮೋಸ ಮಾಡಬಾರದಷ್ಟೆ.

ಜಿಲ್ಲಾಸ್ಪತ್ರೆ ವೆನ್ಲಾಕ್ ನಲ್ಲಿ "ಐಸಿಯು" ಬೆಡ್ ಸಿಗುವುದೇ ಇಲ್ಲ, ಯಾವಾಗಲು "ಐಸಿಯು ತುಂಬಿದೆ" ಎಂದು ಗಂಭೀರ ಖಾಯಿಲೆಯ ಸ್ಥಿತಿಯಲ್ಲಿರುವ ಬಡವರನ್ನು ಸಾಗಹಾಕಲಾಗುತ್ತದೆ ಎಂಬ ಆರೋಪ ಪದೇ ಪದೆ ಕೇಳಿಬರುತ್ತಿದೆ. ಇಂತಹ ರೋಗಿಯೊಬ್ಬರಿಗೆ ಐಸಿಯು ಬೆಡ್ ಒದಗಿಸಲು ನಾವು ಪಟ್ಟ ಶ್ರಮ, ರೋಗಿಯ ಕುಟುಂಬ ಪಟ್ಟ ಕಷ್ಟವನ್ನು ತಿಂಗಳ ಹಿಂದೆ ಬರೆದಿದ್ದೆ. ಈ ವಾರದಲ್ಲಿ ಅಂತಹದ್ದೆ ಮತ್ತೊಂದು ಪ್ರಕರಣ ನಮ್ಮ ಮುಂದೆ ಬಂತು.

ಬಂಟ್ವಾಳ ಕಡೆಯ ಬಡ ಕುಟುಂಬದ ವ್ಯಕ್ತಿಯೊಬ್ಬರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಅವರನ್ನು‌ ಮಂಗಳೂರಿನ "ಕಿಸೆಗೆ ಸರ್ಜರಿ" ಮಾಡುವುದರಲ್ಲಿ ಖ್ಯಾತಿ ಪಡೆದ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು, ಲೆನ್ಸ್ ನಲ್ಲಿ ಸಮಸ್ಯೆ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಐಸಿಯು ಗೆ ಅಡ್ಮಿಟ್ ಮಾಡಿ ವೆಂಟಿಲೇಟರ್ ಹಾಕಬೇಕು ಎಂದು ಹೇಳಿದ್ದಾರೆ. ವೆಂಟಿಲೇಟರ್ ಬೆಡ್ ಚಾರ್ಜ್ ಒಂದು ದಿನಕ್ಕೆ ಸುಮಾರು 30 ಸಾವಿರು ರೂಪಾಯಿ ಆಗುತ್ತದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯ ದರ ಕೇಳಿ ಗಾಭರಿಯಾದ ರೋಗಿಯ ಕುಟುಂಬಿಕರು ವೆನ್ಲಾಕ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ. ಅಲ್ಲಿ ಯಥಾ ಪ್ರಕಾರ "ಐಸಿಯು ಬೆಡ್ ಗಳು ಹೌಸ್ ಫುಲ್ ಆಗಿವೆ" ಎಂಬ ಸಿದ್ದ ಉತ್ತರ ಸಿಕ್ಕಿದೆ. ಅಸಹಾಯಕರಾದ ರೋಗಿಯ ಕುಟುಂಬಿಕರು ರೋಗಿಯನ್ನು ಸಾಯಲು ಬಿಡಲಾಗದೆ, ಬೇರೆ ದಾರಿ ಇಲ್ಲದೆ "ಕಿಸೆಗೆ ಸರ್ಜರಿ" ಗೆ ಖ್ಯಾತ ಆಗಿರುವ ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಅಡ್ಮಿಟ್ ಮಾಡಿದ್ದಾರೆ.

ಆ ತರುವಾಯ ಆ ಕುಟುಂಬದ ಪರಿಚಿತರೊಬ್ಬರು ನಮ್ಮನ್ನು ಸಂಪರ್ಕಿಸಿ ವೆನ್ಲಾಕ್ ನಲ್ಲಿ ವೆಂಟಿಲೇಟರ್ ಬೆಡ್ ಒದಗಿಸಲು ಸಹಾಯ ಮಾಡುವಂತೆ ವಿನಂತಿಸಿದ್ದಾರೆ. ಅದರಂತೆ, ನಾವು ವೆನ್ಲಾಕ್ ನ ಸಮಿತಿಯಲ್ಲಿರುವ ಒಂದಿಷ್ಟು ಮಾನವೀಯ ಕಾಳಜಿಯುಳ್ಳ ವ್ಯಕ್ತಿಗಳನ್ನು ಸಂಪರ್ಕಿಸಿದೆವು. ಅವರ ಪ್ರಯತ್ನದಿಂದ 24 ತಾಸುಗಳ ತರವಾಯ ಬಂಟ್ವಾಳದ ರೋಗಿಗೆಗೆ ವೆನ್ಲಾಕ್ ನ ಐಸಿಯು ನಲ್ಲಿ ವೆಂಟಿಲೇಟರ್ ಬೆಡ್ ಲಭ್ಯ ಆಯಿತು.

ಇಷ್ಟು ಹೊತ್ತಿಗೆ "ಕಿಸೆಗೆ ಸರ್ಜರಿ" ನಡೆಸುವುದರಲ್ಲಿ ಖ್ಯಾತ ಆಗಿರುವ ಖಾಸಗಿ ಆಸ್ಪತ್ರೆಯಲ್ಲಿ ಒಂದು ದಿನದ ಬಿಲ್ ಮೊತ್ತ 60 ಸಾವಿರ ರೂಪಾಯಿ ದಾಟಿತ್ತು. 30 ಸಾವಿರ ಅಂತ ಹೇಳಿದ್ದು ರೆಕ್ಕೆ ಪುಕ್ಕ ಸೇರಿಕೊಂಡು ಡಬ್ಬಲ್ ಆಗಿತ್ತು. ಏನೇನೊ‌ ಕಸರತ್ತು ಮಾಡಿ ಆ ಬಡ ಕುಟುಂಬ ಖಾಸಗಿ ಆಸ್ಪತ್ರೆಯ ಬಿಲ್ ಪಾವತಿಸಿ, ರೋಗಿಯನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಶಿಪ್ಟ್ ಮಾಡಿ ನಿಟ್ಟುಸಿರು ಬಿಟ್ಟಿತು. ಒಂದು ವೇಳೆ ವೆನ್ಲಾಕ್ ನಲ್ಲಿ ಐಸಿಯು ಬೆಡ್ ಸಿಗದೇ ಹೋಗಿದ್ದರೆ, ಒಂದು ವಾರ ಕಾಲ ಖಾಸಗಿ ಆಸ್ಪತ್ರೆಯಲ್ಲೆ ಮುಂದುವರಿದಿದ್ದರೆ ಬಂಟ್ವಾಳದ ರೋಗಿಯ ಬಡ ಕುಟುಂಬದ ಸ್ಥಿತಿ ಏನಾಗುತ್ತಿತ್ತು ?

ಈಗಿರುವ ಪ್ರಶ್ನೆ ಏನೆಂದರೆ, ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಯಾಕೆ ಬಡ ರೋಗಿಗಳ ಪಾಲಿಗೆ ಸದಾ ಹೌಸ್ ಫುಲ್ ಆಗಿರುತ್ತದೆ ? ಇಂತಹ ಸಂದರ್ಭದಲ್ಲಿ ಬಡ ರೋಗಿಗಳು, ಅವರ ಕುಟುಂಬದ ಸ್ಥಿತಿ ಏನು ? ರೋಗಿಯನ್ನು ಸಾಯಲು ಬಿಡುವುದೆ ? ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಮ್ಮ ಮನೆ ಮಠ (ಇದ್ದರೆ) ಮಾರಿ ಬೀದಿಗೆ ಬರುವುದೆ ?

ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು, ಜನಸಂಖ್ಯೆಗೆ ಅನುಗುಣವಾಗಿ ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸುವುದು ಶಾಸಕರು, ಸಂಸದರುಗಳ ಜವಾಬ್ದಾರಿ ಅಲ್ಲವೆ ? ಖಾಸಗಿ ಮೆಡಿಕಲ್ ಕಾಲೇಜುಗಳನ್ನು‌ ಸರಣಿ ಸೂಪರ್ ಮಾರ್ಕೆಟ್ ಗಳ ತರಹ ಜಿಲ್ಲೆಯಲ್ಲಿ ಸ್ಥಾಪಿಸುತ್ತಾ ಹೋಗುವುದು, ಇರುವ ಸರಕಾರಿ ಆಸ್ಪತ್ರೆಗಳನ್ನು ಅವರಿಗೆ ಪಿಪಿಪಿ ಮಾಡೆಲ್ ನಲ್ಲಿ ಗುಟ್ಟಾಗಿ ಹಸ್ತಾಂತರಿಸುವುದು, ಬಡ ರೋಗಿಗಳನ್ನು ಅವರ ಶ್ರೀಮಂತ ವೈದ್ಯ ವಿದ್ಯಾರ್ಥಿಗಳ ಪಾಲಿಗೆ ಕ್ಲಿನಿಕಲ್ ಕ್ಲಾಸ್ ನ ಕಲಿಕೆಯ ಸಾಧನವಾಗಿ ಬಳಸಲು ಬಿಡುವುದು ಆಳುವ ಜನಗಳ ಸಾಧನೆಯೆ ? ಬೀದಿಗೊಂದರಂತೆ ತಲೆ ಎತ್ತಿರುವ "ಕಿಸೆಗೆ ಸರ್ಜರಿ" ಖ್ಯಾತಿಯ ಖಾಸಗಿ ಆಸ್ಪತ್ರೆಗಳ ಮಾಲಕರ ಗೆಳೆತನವೆ ಜಿಲ್ಲೆಯ ಜನಪ್ರತಿನಿಧಿಗಳ ಸಾಧನೆಯ ಕಿರೀಟದ ಗರಿಗಳೆ ?

ಆರೋಗ್ಯದ ಹಕ್ಕಿಗಾಗಿ, ಸರಕಾರಿ ಆಸ್ಪತ್ರೆಗಳ ಬಲವರ್ಧನೆಗಾಗಿ ಹೋರಾಟ ನಡೆಸುವುದು ಇಂದು ನಮ್ಮ ಮುಂದಿನ ಪ್ರಧಾನ ತುರ್ತು

ಮುನೀರ್ ಕಾಟಿಪಳ್ಳ

ಬೀಡಿ ಕಾರ್ಮಿಕರ ಅನಿರ್ಧಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿ ಭಾಗವಹಿಸಿದ dyfi ಜಿಲ್ಲಾ ಮುಖಂಡರು
24/11/2025

ಬೀಡಿ ಕಾರ್ಮಿಕರ ಅನಿರ್ಧಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿ ಭಾಗವಹಿಸಿದ dyfi ಜಿಲ್ಲಾ ಮುಖಂಡರು

*ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಮಂಜೂರು ಮಾಡಲು ಆಗ್ರಹಿಸಿ ಮುಡಿಪು ನಲ್ಲಿ ಡಿವೈಎಫ್ಐ ಮುಡಿಪು ಘಟಕ ವತಿಯಿಂದ ಪ್ರತಿಭಟನೆ ನ...
24/11/2025

*ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಮಂಜೂರು ಮಾಡಲು ಆಗ್ರಹಿಸಿ ಮುಡಿಪು ನಲ್ಲಿ ಡಿವೈಎಫ್ಐ ಮುಡಿಪು ಘಟಕ ವತಿಯಿಂದ ಪ್ರತಿಭಟನೆ ನಡೆಯಿತು*

ಉಳ್ಳಾಲದಲ್ಲಿ ಸರಕಾರಿ ತಾಲೂಕು ಆಸ್ಪತ್ರೆ ಸ್ಥಾಪನೆ ಯಾವಾಗ ?ಶಾಸಕರು ಉತ್ತರಿಸಲಿ- ಸಂತೋಷ್ ಬಜಾಲ್

ಮುಡಿಪು: ನಾಲ್ಕೈದು ಖಾಸಗೀ ಮೆಡಿಕಲ್ ಕಾಲೇಜುಗಳಿರುವ ಉಳ್ಳಾಲ ತಾಲೂಕಲ್ಲಿ ವೈದ್ಯಕೀಯ ಅಧಿನಿಯಮದ ಪ್ರಕಾರ ಒಂದು ಸರಕಾರಿ ತಾಲೂಕು ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗದಿರೋದು ಸ್ಥಳೀಯ ಶಾಸಕರ ಇಚ್ಛಾಶಕ್ತಿಯ ಕೊರತೆ. ಜನಪ್ರತಿನಿಧಿಯ ಬೇಜವಾಬ್ದಾರಿ ನಡೆಯಿಂದ ತಾಲೂಕಿನ ಜನತೆ ಸರಕಾರಿ ಆಸ್ಪತ್ರೆಗಳಿಂದ ವಂಚಿತರಾಗಿದ್ದಾರೆ. ಉಳ್ಳಾಲದಲ್ಲಿ ಸರಕಾರಿ ತಾಲೂಕು ಆಸ್ಪತ್ರೆ ನಿರ್ಮಿಸಲು ಇನ್ನೆಷ್ಟು ಸಮಯ ಬೇಕೆಂದು ಶಾಸಕರು ಉತ್ತರಿಸಲಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು (24-11-25) ಡಿವೈಎಫ್ಐ ಮುಡಿಪು ವಲಯ ಸಮಿತಿ ನೇತೃತ್ವದಲ್ಲಿ ಉಳ್ಳಾಲದಲ್ಲಿ 100 ಬೆಡ್ ಗಳ ತಾಲೂಕು ಆಸ್ಪತ್ರೆಗಳ ಸಹಿತ ಮುಡಿಪುಗೆ ಸಮುದಾಯ ಆಸ್ಪತ್ರೆ ಸಹಿತ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಕಿದ್ವಾಯಿ, ಜಯದೇವ ಸರಕಾರಿ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಲು ಒತ್ತಾಯಿಸಿ ಮುಡಿಪು ಜಂಕ್ಷನ್ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಸರಕಾರಿ ಆಸ್ಪತ್ರೆಯ ಕಡೆಗಣನೆಯಿಂದ ಖಾಸಗೀ ಆಸ್ಪತ್ರೆಗಳು ಚಿಕಿತ್ಸೆಯ ಹೆಸರಲ್ಲಿ ಜನಸಾಮಾನ್ಯರ ಸುಲಿಗೆ ನಡೆಸುತ್ತಿದೆ. ಸಣ್ಣ ಪುಟ್ಟ ರೋಗಗಳಿಗೂ ಅನಗತ್ಯ ಪರೀಕ್ಷೆ ನಡೆಸುವುದಲ್ಲದೇ ಒಂದೇ ಬಗೆಯ ಚಿಕಿತ್ಸೆಗೆ ನಗರದ ಖಾಸಗೀ ಆಸ್ಪತ್ರೆಗಳೆಲ್ಲವೂ ವಿಧ ವಿಧ ದರಗಳನ್ನು ವಿಧಿಸುತ್ತಿರುವುದು ಸರಕಾರದ ವೈದ್ಯಕೀಯ ಅಧಿನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಜಿಲ್ಲೆಯಲ್ಲಿ ಆರೋಗ್ಯ ಸೇವಾ ನಿಯಂತ್ರಣ ಪ್ರಾಧಿಕಾರವನ್ನು ಜಿಲ್ಲಾಡಳಿತ ಈವೆರೆಗೂ ರಚಿಸಿಲ್ಲ ಅಲ್ಲದೇ ಒಂದೇ ಒಂದು ಸಭೆ ಕರೆಯದೆ ಖಾಸಗೀ ಆಸ್ಪತ್ರೆಗಳ ಪರವಾದ ನೀತಿಯನ್ನು ಅನುಸರಿಸಿರೋದು ಖಂಡನೀಯ.

ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಗಳು ನುರಿತ ವೈದ್ಯರ ಸಹಿತ ಎಲ್ಲಾ ಬಗೆಯ ಮೂಲಭೂತ ಸೌಕರ್ಯಗಳಿಂದ ವಂಚನೆಗೊಳಗಾಗಿದೆ. ಒಮ್ಮೆ ಅಂಕೆಸಂಖ್ಯೆಗಳನ್ನು ಗಮನಿಸಿದರೆ ಒಟ್ಟು ಜಿಲ್ಲೆಯಲ್ಲಿ 541 ಸರಕಾರಿ ಆಸ್ಪತ್ರೆಗಳಿವೆ ಅವುಗಳಲ್ಲಿ ಪ್ರಾಥಮಿಕ ಆರೋಗ್ಯ ಉಪಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಗಳ ವರೆಗೂ ಸೇರಿವೆ. ಇಷ್ಟು ಆಸ್ಪತ್ರೆಗಳಲ್ಲಿ ಸರಕಾರಿ ವೈದ್ಯರಿರೋದು ಕೇವಲ 141 ಅಷ್ಟೇ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ವೈದ್ಯರ ಕೊರತೆಗಳು ಸರಕಾರಿ ಆಸ್ಪತ್ರೆಗಳಲ್ಲಿವೆ ಅದೂ ಕೂಡ ಪ್ರತೀ ವರುಷ 12864 ವೈದ್ಯರನ್ನು ಸೃಷ್ಟಿ ಮಾಡುವ ಜಿಲ್ಲೆಯಲ್ಲಿ ಎಂತಹ ದುರಂತ ಅಲ್ಲವೇ ಎಂದರು. ಆಳುವ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಜಿಲ್ಲೆಯಲ್ಲಿ ಹೆಚ್ಚೆಚ್ಚು ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿ ಇರುವ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳ ಒದಗಿಸಿಕೊಡಬೇಕು. ಪಿಪಿಪಿ ಮಾದರಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ದ.ಕ ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸರಕಾರಿ ಆಸ್ಪತ್ರೆಗಳು ಸ್ಥಾಪನೆಗೊಳ್ಳಲೇ ಬೇಕು. ಪ್ರತೀ ತಾಲೂಕಿಗೆ ತಾಲೂಕು ಆಸ್ಪತ್ರೆ ಸಹಿತ ಸರಕಾರ ಕ್ಯಾನ್ಸರ್ ಚಿಕಿತ್ಸೆಗೆ ಕಿದ್ವಾಯಿ, ಹೃದ್ರೋಗ ಕಾಯಿಲೆಗೆ ಜಯದೇವ ಆಸ್ಪತ್ರೆ ಘಟಕಗಳನ್ನು ಈ ಜಿಲ್ಲೆಯಲ್ಲೂ ಕೂಡಲೇ ಸ್ಥಾಪಿಸಲು ಕ್ರಮಕೈಗೊಳ್ಳಬೇಕು ಹಾಗು ಸರಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕೆಂದು ಡಿವೈಎಫ್ಐ ನಿರಂತರ ಹೋರಾಟಗಳನ್ನು ಹಮ್ಮಿಕೊಂಡಿದೆ.

ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ ಮಾತನಾಡಿ ಬಡವರ ಮನೆಯ ಮಕ್ಕಳಿಗೆ ವೈದ್ಯರಾಗಲು ಕನಿಷ್ಟ ಸರಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಈವರೆಗೂ ಸಾಧ್ಯವಾಗಿಲ್ಲ‌. ಉಳ್ಳಾಲದಲ್ಲಿ ಸರಕಾರಿ ತಾಲೂಕು ಆಸ್ಪತ್ರೆ ಆಗುವವರೆಗೂ ಡಿವೈಎಫ್ಐ ಚಳುವಳಿ ತೀವೃಗೊಳ್ಳಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಉಪಾಧ್ಯಕ್ಷ ಅಶ್ರಫ್ ಹರೇಕಳ ರಝಾಕ್ ಮುಡಿಪು ,ಮುಖಂಡರಾದ ರಫೀಕ್ ಹರೇಕಳ,ಬಶೀರ್ ಲಚ್ಚಿಲ್,ಇಬ್ರಾಹಿಂ ಮದಕ,ನೌಶಾದ್ ಕುರ್ನಾಡು,ಇರ್ಫಾನ್ ಇರಾ,ಫಾರೂಕ್ ಕೊಣಾಜೆ,ಅಬೂಬಕರ್ ಜಲ್ಲಿ ಉಪಸ್ಥಿತರಿದ್ದರು.

23/11/2025

Address

Mangalore

Website

Alerts

Be the first to know and let us send you an email when DYFI Dakshina Kannada - Mangalore posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram